ಕರ್ನಾಟಕದ ಅರಣ್ಯದ ವಿಶ್ವಕೋಶವೇ ಆಗಿರುವ, ಅದೆಷ್ಟೋ ಬರಡುಭೂಮಿಗಳಲ್ಲಿ ಕಾಡು ಕಟ್ಟಿ ಕೃತಾರ್ಥರಾದ ಖ್ಯಾತ ಪರಿಸರವಾದಿ ಅ.ನಾ.ಯಲ್ಲಪ್ಪರೆಡ್ಡಿಯವರು ರೈತರಿಗೆಂದೇ ಬರೆದ ಲೇಖನಗಳು ಇಲ್ಲಿವೆ. ’ಸಹಜ ಸಾಗುವಳಿ’ ಪತ್ರಿಕೆಯಲ್ಲಿ ’ಅರಣ್ಯೇ ನಿನಗೆ ಶರಣು’ ಲೇಖನಮಾಲಿಕೆಯಲ್ಲಿ ಮೊದಲು ಪ್ರಕಟಗೊಂಡ 17 ಲೇಖನಗಳು ಇಲ್ಲಿ ’ಅರಣ್ಯಾಂತರಂಗ’, ’ವಿದ್ಯಮಾನ-ವಿಶ್ಲೇಷಣೆ’ ಮತ್ತು ’ವೈವಿಧ್ಯ’ಗಳೆಂಬ ಮೂರು ಭಾಗಗಳಲ್ಲಿ ಹರಡಿಕೊಂಡಿವೆ. ರೈತರಿಗೆ ಮರಗಳ ಬಗ್ಗೆ ಪ್ರೀತಿ,ಕುತೂಹಲ ಹುಟ್ಟಿಸುವಂತಹ ಮಾಹಿತಿ ಪೂರ್ಣ ವಿಶಿಷ್ಟ ನಿರೂಪಣಾ ಶೈಲಿ ಯಲ್ಲಪ್ಪರೆಡ್ಡಿ ಅವರದ್ದು. ರೈತರ ಮತ್ತು ಯಲ್ಲಪ್ಪರೆಡ್ಡಿಯವರ ಜೊತೆ ಬೆಸುಗೆಯ ಕೊಂಡಿಯಾಗಿದೆ ಈ ಪುಸ್ತಕ.