.png?raw=true)
ಸಹಜ ಬೇಸಾಯ ಹೆಜ್ಜೆ ಗುರುತುಗಳು
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ಸಂತೇಶಿವರ ಗ್ರಾಮದ ಬಸವರಾಜು. ಬಿ. ಅವರು ಸಹಜ ಬೇಸಾಯದಲ್ಲಿ ತೋಟ ಕಟ್ಟಿದ ಸುದೀರ್ಘ ಕಥನ ಇಲ್ಲಿ ಮೂಡಿ ಬಂದಿದೆ. ಭಾಗ- 1ರಲ್ಲಿ ಚಿಕ್ಕನಾಯ್ಕನಹಳ್ಳಿಯ ಪ್ರಾರಂಭದ ದಿನಗಳ ಅವರ ಕೃಷಿ ಬದುಕು ಮತ್ತು ಬೇಸಾಯ ಕ್ರಮಗಳ ಅನುಭವ 2 ಅಧ್ಯಾಯಗಳಲ್ಲಿ ವಿಸೃತವಾಗಿ ಮೂಡಿ ಬಂದಿದೆ. ಭಾಗ-2 ಸಂತೇಶಿವರದಲ್ಲಿ ಪ್ರಾರಂಭದಿಂದಲೇ ಸಹಜ ಬೇಸಾಯದಲ್ಲಿ ಕಟ್ಟಿದ ಬಹುಬೆಳೆ ತೋಟದ ಸುತ್ತಾ 6 ಅಧ್ಯಾಯಗಳನ್ನು ಒಳಗೊಂಡಿದೆ. ಭಾಗ-3 ರಲ್ಲಿ ಬೇಸಾಯದ ಮಿತ್ರರು, ಅಭಿಮಾನಿಗಳ ಕಣ್ಣಲ್ಲಿ ಮೂಡಿಬಂದ ಬಸವರಾಜು ಅವರ ಆಪ್ತ ಚಿತ್ರಣ ಇದೆ. ಸಹಜ ಕೃಷಿಯಲ್ಲಿ ಹೊಸದಾಗಿ ತೋಟ ಕಟ್ಟ ಬಯಸುವವರಿಗೂ, ಈಗಾಗಲೇ ತೋಟ ಕಟ್ಟಿ ಹಲವು ಸಮಸ್ಯೆಗಳಲ್ಲಿ ಸಿಕ್ಕಿಕೊಂಡಿರುವವರಿಗೂ ಈ ಪುಸ್ತಕ ಆಪ್ತ ಸಮಾಲೋಚನೆಯಂತಿದೆ.